ನೆಲಮಂಗಲ: ವೃಷಭವತಿಯ ಪೈಪ್ ಲೈನ್ ಕಾಮಗಾರಿ ವೇಳೆ ಕೂಲಿ ಕಾರ್ಮಿಕನ ದಾರುಣ ಸಾವು

ನೆಲಮಂಗಲ: ವೃಷಭವತಿಯ ಪೈಪ್ ಲೈನ್ ಕಾಮಗಾರಿ ವೇಳೆ ಕೂಲಿ ಕಾರ್ಮಿಕನ ದಾರುಣ ಸಾವು

ತ್ಯಾಮಗೊಂಡ್ಲು, ನೆಲಮಂಗಲ: ವೃಷಭಾವತಿಯ ನೀರಿನ ಪೈಪ್ ಲೈನ್ ಅಡವಳಿಕೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಸಾವನ್ನಪ್ಪಿದ ದುರ್ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಕೆರೆಯ ಸಮೀಪದಲ್ಲಿ ನಡೆದಿದೆ.

ಮೃತನನ್ನು ಉತ್ತರ ಪ್ರದೇಶ ಮೂಲದ 25 ವರ್ಷದ ಜಿಗಣೇಶ್ ಎಂದು ಗುರುತಿಸಲಾಗಿದೆ. ಘಟನೆ ನಡೆಯುವ ವೇಳೆ ಜಿಗಣೇಶ್ ಜೆಸಿಬಿ ಬಳಸಿ ಪೈಪ್ ಲೈನ್ ವೆಡ್ಡಿಂಗ್ ಕೆಲಸದಲ್ಲಿ ತೊಡಗಿದ್ದನು. ಈ ವೇಳೆ ಜೆಸಿಬಿಯಿಂದ ಮಣ್ಣು ಸ್ಪರ್ಶವಾಗಿ ಕುಸಿದು ಬಿದ್ದ ಪರಿಣಾಮ, ಅವನು ಸ್ಥಳದಲ್ಲಿಯೇ ಮೃತಪಟ್ಟನು.

ಘಟನೆ ಸ್ಥಳದಲ್ಲಿ ಭೀತಿಯ ವಾತಾವರಣ ಉಂಟಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಪೈಪ್ ಲೈನ್ ಕಾಮಗಾರಿಗಳು ನೆಲಮಂಗಲ ತಾಲೂಕಿನ ಹಲವೆಡೆ ನಡೆಯುತ್ತಿದ್ದು, ಸುರಕ್ಷತಾ ಕ್ರಮಗಳ ಕೊರತೆ ಕುರಿತಂತೆ ಗಂಭೀರ ಪ್ರಶ್ನೆಗಳು ಕೇಳಿಬರುತ್ತಿವೆ.

ಘಟನೆಯ ಬಗ್ಗೆ ತ್ಯಾಮಗೊಂಡ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯರು ಮತ್ತು ಕಾರ್ಮಿಕ ಸಂಘಟನೆಗಳು, ಇಂತಹ ಕಾಮಗಾರಿಗಳಿಗೆ ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *