ಈಗಲಾದರೂ ಬಾಯ್ಬುಟ್ಟು ಮಾತಾಡಿ ಇಲ್ಲ ಅಧಿಕಾರ ಬಿಟ್ಟು ಮನೆಗೆ ನಡೆಯಿರಿ ಎಂದು ಮೋದಿಯನ್ನು ಕಟುವಾಗಿ ಕುಟುಕಿದ MLC ಸುಧಾಮ್‌ ದಾಸ್. MLC Sudham Das harshly criticized Modi, saying, “Don’t talk nonsense now, leave power and go home.”

ಈಗಲಾದರೂ ಬಾಯ್ಬುಟ್ಟು ಮಾತಾಡಿ ಇಲ್ಲ ಅಧಿಕಾರ ಬಿಟ್ಟು ಮನೆಗೆ ನಡೆಯಿರಿ ಎಂದು ಮೋದಿಯನ್ನು ಕಟುವಾಗಿ ಕುಟುಕಿದ MLC ಸುಧಾಮ್‌ ದಾಸ್. MLC Sudham Das harshly criticized Modi, saying, “Don’t talk nonsense now, leave power and go home.”

ಸದಾ ತಮ್ಮ ಸ್ಪಷ್ಟವಾದ ನಿಲುವುಗಳಿಂದ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸುವ ಸುಧಾಮ್‌ ದಾಸ್‌ ಈ ಭಾರಿ ಟ್ರಂಪ್‌ ಭಾರತದಲ್ಲಿ ಆಪಲ್‌ ಕಂಪನಿ ಐಫೋನ್‌ ತಯಾರಿಸುವುದು ಇಷ್ಟವಿಲ್ಲ ಎಂಬ ಹೇಳಿಕೆಗೆ ತುಟಿ ಬಿಚ್ಚದ ಮೋದಿಯ ವಿರುದ್ದವಾಗಿ ಗುಡುಗಿದ್ದಾರೆ. ಈ ವಿಚಾರವನ್ನು ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು

ಟಿಮ್‌, ನೀವು ನನ್ನ ಸ್ನೇಹಿತ. ನೀವು ಅಮೆರಿಕದಲ್ಲಿ 500 ಬಿಲಿಯನ್‌ ಡಾಲರ್‌ನಷ್ಟು (ಸುಮಾರು ₹43 ಲಕ್ಷ ಕೋಟಿ) ಹೂಡಿಕೆ ಮಾಡಲಿದ್ದೀರಿ. ಆದರೆ, ನಾನು ಈಗಷ್ಟೇ ಕೇಳಲ್ಪಟ್ಟೆ. ನೀವು ಭಾರತದಲ್ಲಿ ಸಾಕಷ್ಟು ಹೂಡಿಕೆ ಮಾಡಲಿದ್ದೀರಿ ಎಂದು. ಭಾರತದಲ್ಲಿ ನೀವು ಐಫೋನ್‌ ತಯಾರಿಕೆ ಮಾಡುವುದು ನನಗೆ ಇಷ್ಟವಿಲ್ಲ. ಭಾರತದಲ್ಲಿ ತಯಾರಾಗುವ ಐಫೋನ್‌ಗಳು ಅಮೆರಿಕದಲ್ಲಿ ಮಾರಾಟವಾಗುವುದು ನಿಲ್ಲಬೇಕು. ಅವರದ್ದು ಅವರು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಅದು ಭಾರಿ ಸುಂಕ ವಿಧಿಸುವ ದೇಶ. ಆ ದೇಶದಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಚೀನಾದವರು ಇಷ್ಟು ವರ್ಷಗಳಲ್ಲಿ ನಿಮಗೆ ಮಾಡಿಕೊಟ್ಟ ಎಲ್ಲ ಅನುಕೂಲಗಳನ್ನೂ ನಾವು ಮಾಡಿಕೊಡುತ್ತೇವೆ. ನೀವು ನಮ್ಮ ದೇಶದಲ್ಲಿ ಐಫೋನ್‌ ತಯಾರಿಕೆ ಮಾಡಿ.

ಎಂದು ಹೇಳಿಕೆ ನೀಡಿ ಭಾರತಕ್ಕೆ ವಿಶ್ವ ಮಟ್ಟದಲ್ಲಿ ಇದ್ದ ಖ್ಯಾತಿಗೆ ಘಾಸಿಗೊಳಿಸಿದ್ದಾರೆ.

ಆದರೂ ಮಾನ್ಯ ಪ್ರಧಾನ ಮಂತ್ರಿ ಮೋದಿಯವರು ಗಪ್ ಚುಪ್ ಎಂದು ಮತ್ತೊಮ್ಮೆ ಬಾಯಿ ಬಿಡದೆ ಸುಮ್ಮನೆ ಕುಳಿತುಬಿಟ್ಟಿದ್ದಾರೆ.

ಅಮೆರಿಕದ ಅಧ್ಯಕ್ಷದ ಡೊನಾಲ್ಡ್ ಟ್ರಂಪ್ ಭಾರತಕ್ಕೆ ನೇರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆದರಿಕೆ ಹಾಕುತ್ತಿದ್ದರು ಕೂಡ ಮೋದಿಯವರು ನಿಶ್ಶಬ್ದವಾಗಿರುವುದು ಯಾವ ಉದ್ದೇಶಕ್ಕಾಗಿ? ಎಲ್ಲೋಯ್ತು ಅವರ 56 ಇಂಚಿನ ಎದೆ.?

ಇನ್ನು ಬಿಜೆಪಿಯ ಕೆಲವು ನಕಲಿ ದೇಶ ಭಕ್ತರೆಲ್ಲರೂ ಕೂಡ ಟ್ರಂಪ್ ನ ಬೇದರಿಕೆಗೆ ಹೆದರಿ ಯಾವ ಬಿಲ ಸೇರಿ ಅಡಗಿ ಕುಳಿತ್ತಿದ್ದಾರೆ ತಿಳಿದಿಲ್ಲ, ಯಾಕೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಕ್ಕೆ ವ್ಯಾಪರದ ಬೆದರಿಕೆ ಹಾಕುತ್ತಿದ್ದರೂ ಕೂಡ ಹೋರಾಟ ಮತ್ತು ಚೀರಾಟಗಳೆಲ್ಲವೂ ತಟಸ್ಥವಾಗಿಬಿಟ್ಟಿವೆ.

ಭಾರತ‌ ಎಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಗತ್ತು ಇತ್ತು, ಡೊನಾಲ್ಡ್ ಟ್ರಂಪ್ ಅದನ್ನು ಕುಗ್ಗಿಸುತ್ತಿದ್ದರು ಕೂಡ ಸ್ವಯಂ ಘೋಷಿತ ವಿಶ್ವಗುರುಗಳು ಯಾಕೆ ಟ್ರಂಪ್ ರನ್ನು ಪ್ರಶ್ನೆ ಮಾಡದೆ ಮೌನವಾಗಿದ್ದಾರೆ ತಿಳಿಯದು.

ಇದು ಬರಿ ಭಾರತದ ವ್ಯಾಪರಕ್ಕೆ ಅಥವ ವ್ಯವಹಾರಕ್ಕೆ ಆಗುತ್ತಿರುವ ಅವಮಾನವಲ್ಲ ಸಮಸ್ತ ಭಾರತದ ಪ್ರತಿಯೊಬ್ಬ ನಾಗರೀಕರಿಗೂ ಆಗುತ್ತಿರುವ ಅವಮಾನ.

ಈಗಲಾದರೂ ಮೌನ ಮುರಿದು ಮಾತನಾಡಿ ಪ್ರಧಾನ ಮಂತ್ರಿಗಳೆ, ಇಲ್ಲವಾದರೆ ಅಧಿಕಾರದಿಂದ ಕೆಳಗಿಳಿದು ಮನೆಗೆ ನಡೆಯಿರಿ.

ಎಂದು ಮೋದಿಯವರ ಮೌನದ ಬಗ್ಗೆ ಪ್ರಶ್ನೆ ಮಾಡುತ್ತ, ಕೇಂದ್ರ ಸರ್ಕಾರದ ವಿರುದ್ಧವಾಗಿ ಕುಟುಕುವ ಕೆಲಸ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *