ಬೆಂಗಳೂರು: ಕೆ.ಆರ್.ಪುರಂ ಮಾರ್ಕೆಟ್ನಲ್ಲಿ ಗಾಂಜಾ ನಶೆಯಲ್ಲಿ ಪುಡಿರೌಡಿಯ ಅಟ್ಟಹಾಸ: ಲಾಂಗ್ ಹಿಡಿದು ಕಾರು-ವಾಹನಗಳ ಗಾಜು ಪುಡಿ, ವ್ಯಾಪಾರಿಗಳಿಗೆ ಬೆದರಿಕೆ
ಬೆಂಗಳೂರು ನಗರದ ಕೆ.ಆರ್.ಪುರಂ ಮಾರ್ಕೆಟ್ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಪುಡಿರೌಡಿ ಒಬ್ಬನು ಗಾಂಜಾ ನಶೆಯಲ್ಲಿ ಲಾಂಗ್ ಹಿಡಿದು ಅಟ್ಟಹಾಸ ಮೆರೆಯುತ್ತಿದ್ದ. ಮಾರ್ಕೆಟ್ನಲ್ಲಿ ನಿಲ್ಲಿಸಿದ್ದ ಕಾರುಗಳು ಹಾಗೂ ಗೂಡ್ಸ್ ವಾಹನಗಳ ಗಾಜುಗಳನ್ನು ಕತ್ತರಿಸಿ ಡ್ಯಾಮೇಜ್ ಮಾಡಿದ್ದಾನೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಾಹನ ಮಾಲೀಕರು ಮತ್ತು ವ್ಯಾಪಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರಿಂದ ಯಾವುದೇ ಭಯವಿಲ್ಲದಂತೆ ಇಂತಹ ರೌಡಿಗಳು ಸಾರ್ವಜನಿಕ ಸ್ಥಳಗಳಲ್ಲಿ ನಿಷ್ಕಟಕವಾಗಿ ಅಟ್ಟಹಾಸ ಮೆರೆದಿದ್ದು, ಸ್ಥಳೀಯರಲ್ಲೂ ಭೀತಿಯನ್ನುಂಟುಮಾಡಿದೆ. ಗಾಂಜಾ ಸೇವನೆಯ ನಶೆಯಲ್ಲಿ ಸಾರ್ವಜನಿಕರಿಗೆ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದ್ದು, ಪೊಲೀಸರು ಈ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.