Bidar: ಪ್ರೀತಿಸಿದ ಹುಡುಗಿಯನ್ನು ಬಿಟ್ಟು ಬಿಡಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಬರ್ಬರವಾಗಿ ಹತ್ಯೆಯಾಗಿದ್ದಾನೆ. ರಾತ್ರಿ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಹೀಗೆ ಆ ಯುವಕ ಕೊಲೆಯಾಗಿದ್ದು ಬೇರೆ ಯಾರಿಂದಲೋ ಅಲ್ಲ, ಬದಲಾಗಿ ತಾನು ಪ್ರೀತಿಸಿದ್ದ ಹುಡುಗಿಯ ಅಣ್ಣಂದಿರಿಂದಲೇ!
ಪ್ರೀತಿಸಿದ ಹುಡುಗಿಯನ್ನು (Lover) ಬಿಟ್ಟು ಬಿಡಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಬರ್ಬರವಾಗಿ ಹತ್ಯೆಯಾಗಿದ್ದಾನೆ. ರಾತ್ರಿ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಹೀಗೆ ಆ ಯುವಕ ಕೊಲೆಯಾಗಿದ್ದು ಬೇರೆ ಯಾರಿಂದಲೋ ಅಲ್ಲ, ಬದಲಾಗಿ ತಾನು ಪ್ರೀತಿಸಿದ್ದ ಹುಡುಗಿಯ ಅಣ್ಣಂದಿರಿಂದಲೇ! ಇಂಥದ್ದೊಂದು ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basava Kalyan) ತಾಲೂಕಿನ ನಿರಗುಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. 25 ವರ್ಷದ ಪ್ರಶಾಂತ್ ಬಿರಾದಾರ್ (Prashanth Biradar) ಎಂಬ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿದೆ. ಈತನನ್ನು ಬರ್ಬರವಾಗಿ ಕೊಲೆಗೈದ ಆರೋಪದ ಮೇಲೆ ಯಲ್ಲಾಲಿಂಗ ಮೇತ್ರೆ ಹಾಗೂ ಪ್ರಶಾಂತ್ ಮೇತ್ರೆ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಯನ್ನು ಬಿಡಲು ನಿರಾಕರಿಸಿದ ಯುವಕನ ಕೊಲೆ
ಪ್ರೀತಿಸಿದ ಯುವತಿಯನ್ನ ಬಿಟ್ಟು ಬಿಡಲು ಯುವಕ ನಿರಾಕರಿಸಿರೋ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಯುವತಿಯ ಸಹೋದರರು ರಾಕ್ಷಸರಂತೆ ಆಗಿದ್ದಾರೆ. ತಂಗಿಯನ್ನು ಬಿಟ್ಟು ಬದುಕೋದಿಲ್ಲ ಎಂದಿದ್ದ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿ, ಭೀಕರವಾಗಿ ಕೊಲೆ ಮಾಡಿದ್ದಾರೆ.