ರಾಜ್ಯಾದ್ಯಾಂತ 40 ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ
ಮೇ 15, 2025 | ಕರ್ನಾಟಕ
ರಾಜ್ಯದೆಲ್ಲೆಡೆ ಭ್ರಷ್ಟಾಚಾರ ವಿರುದ್ಧ ದಿಟ್ಟ ನಡೆ ತೆಗೆದುಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಿಗ್ಗೆ ಏಕಕಾಲದಲ್ಲಿ 40 ಸ್ಥಳಗಳಲ್ಲಿ ದಾಳಿ ನಡೆಸಿದರು. known sources of incomeಗಿಂತ ಅಧಿಕ ಆಸ್ತಿ ಹೊಂದಿರುವ ಅಧಿಕಾರಿಗಳ ಮನೆ ಮತ್ತು ಕಚೇರಿಗಳನ್ನು ತಪಾಸಣೆಗೆ ಒಳಪಡಿಸಿದರು. ಈ ಕ್ರಮದ ಹಿಂದೆ ಹಲವಾರು ಸಾರ್ವಜನಿಕ ದೂರುಗಳು, ಮಾಧ್ಯಮ ಸ್ಟಿಂಗ್ ಆಪರೇಷನ್ಗಳು ಹಾಗೂ ಲೋಕಾಯುಕ್ತದ ಪ್ರಾಥಮಿಕ ತನಿಖೆಗಳಿವೆ.
ಮುಖ್ಯಾಂಶಗಳು
ಒಟ್ಟು ದಾಳಿ ಸ್ಥಳಗಳು: 40
ದಾಳಿ ಸಮಯ: ಮೇ 15, 2025ರ ಗುರುವಾರ ಬೆಳಿಗ್ಗೆ
ದಾಳಿಗೆ ಒಳಗಾದ ಅಧಿಕಾರಿಗಳು: 7 ಹೆಸರು ಬಹಿರಂಗ
ದಾಳಿ ಪ್ರದೇಶಗಳು: ಬೆಂಗಳೂರು, ತುಮಕೂರು, ಮಂಗಳೂರು, ಯಾದಗಿರಿ, ವಿಜಯಪುರ, ಬೆಂಗಳೂರು ಗ್ರಾಮಾಂತರ
ದಾಳಿಗೆ ಒಳಗಾದ ಪ್ರಮುಖ ಅಧಿಕಾರಿಗಳು
ರಾಜಶೇಖರ್ – ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ತುಮಕೂರು
ಮಂಜುನಾಥ್ – ಸರ್ವೆ ಸೂಪರ್ವೈಸರ್, ಮಂಗಳೂರು
ರೇಣುಕಾ – ಅಧಿಕಾರಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಿಜಯಪುರ
ಮುರಳಿ ಟಿವಿ – ಹೆಚ್ಚುವರಿ ನಿರ್ದೇಶಕರು, ನಗರ ಯೋಜನಾ ನಿರ್ದೇಶನಾಲಯ, ಬೆಂಗಳೂರು
ಹೆಚ್.ಆರ್. ನಟರಾಜ್ – ಇನ್ಸ್ಪೆಕ್ಟರ್, ಕಾನೂನು ಮಾಪನಶಾಸ್ತ್ರ ಇಲಾಖೆ, ಬೆಂಗಳೂರು
ಅನಂತ್ ಕುಮಾರ್ – ಎಸ್ಡಿಎ, ಹೊಸಕೋಟೆ ತಾಲ್ಲೂಕು ಕಚೇರಿ, ಬೆಂಗಳೂರು ಗ್ರಾಮಾಂತರ
ಉಮಾಕಾಂತ್ – ತಹಸೀಲ್ದಾರ್, ಶಹಾಪುರ ತಾಲ್ಲೂಕು ಕಚೇರಿ, ಯಾದಗಿರಿ
ಪ್ರಮುಖ ಸ್ಥಳಗಳ ದಾಳಿ ವಿವರಗಳು
ತುಮಕೂರು
ರಾಜಶೇಖರ್ ಅವರ ಮನೆ ಮತ್ತು ಕಚೇರಿ, ಜೊತೆಗೆ ಅಶೋಕನಗರ ಎಸ್ಐಟಿ 4ನೇ ಕ್ರಾಸ್ನಲ್ಲಿರುವ ಸಹೋದರನ ಮನೆ ಮೇಲೂ ದಾಳಿ ನಡೆಯಿತು. 10ಕ್ಕೂ ಹೆಚ್ಚು ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದರು.
ವಿಜಯಪುರ
ರೇಣುಕಾ ಅವರ ಮೇಲೆ ಸುವರ್ಣ ನ್ಯೂಸ್ ಚಾನೆಲ್ನ ಸ್ಟಿಂಗ್ ಆಪರೇಷನ್ ಆಧಾರಿತ ದಾಳಿ. ಸೊಲ್ಲಾಪುರ ಅಪಾರ್ಟ್ಮೆಂಟ್ ಹಾಗೂ ರಿಂಗ್ ರೋಡ್ ನಿವಾಸದ ಮೇಲೆ ದಾಳಿ. ಇತ್ತೀಚೆಗೆ ಅಮಾನತುಗೊಂಡಿದ್ದು, ತನಿಖೆ ಮುಂದುವರಿಯುತ್ತಿದೆ.
ಯಾದಗಿರಿ (ಕಲಬುರಗಿ)
ಉಮಾಕಾಂತ್ ಅವರ ಶಹಾಪೂರ ಕಚೇರಿ ಹಾಗೂ ಅಕ್ಕಮಹಾದೇವಿ ಬಡಾವಣೆಯ ಮನೆಯ ಮೇಲೆ ದಾಳಿ. ಡಿವೈಎಸ್ಪಿ ಜೆ.ಎಚ್. ಇನಾಂದಾರ್ ನೇತೃತ್ವದ ತಂಡ ದಾಳಿ ನಡೆಸಿತು.
ಮಂಗಳೂರು
ಮಂಜುನಾಥ್ ಅವರ ಬಿಜೈಯಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆಯಿತು.
ಬೆಂಗಳೂರು ಮತ್ತು ಗ್ರಾಮಾಂತರ
ಮುರಳಿ ಟಿವಿ, ನಟರಾಜ್, ಮತ್ತು ಅನಂತ್ ಕುಮಾರ್ ಅವರ ಮನೆ ಮತ್ತು ಕಚೇರಿಗಳಲ್ಲೂ ದಾಖಲೆ ಪರಿಶೀಲನೆ ನಡೆದಿದೆ.
ಪ್ರಸ್ತುತ ಸ್ಥಿತಿ ಮತ್ತು ಮುಂದಿನ ಹಂತಗಳು
ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ
ಆಸ್ತಿಯ ಮೌಲ್ಯ ನಿರ್ಧಾರ ಮೂಲಕ ಭ್ರಷ್ಟಾಚಾರ ಪ್ರಮಾಣ ಅಂದಾಜು
ಇನ್ನೂ ಹಲವು ಅಧಿಕಾರಿಗಳು ದಾಳಿಗೆ ಒಳಗಾಗುವ ಸಾಧ್ಯತೆ