ಪತ್ನಿಯನ್ನು ಕೊಂದು ಸ್ನೇಹಿತನಿಗೆ ತಿಳಿಸಿ ಆತ್ಮಹತ್ಯೆ ಮಾಡಿಕೊಂಡ ಐಟಿ ಎಂಜಿನಿಯರ್

ಪತ್ನಿಯನ್ನು ಕೊಂದು ಸ್ನೇಹಿತನಿಗೆ ತಿಳಿಸಿ ಆತ್ಮಹತ್ಯೆ ಮಾಡಿಕೊಂಡ ಐಟಿ ಎಂಜಿನಿಯರ್

ಗುರುಗ್ರಾಮ, ಸೆಪ್ಟೆಂಬರ್ 30: ಗುರುಗ್ರಾಮದಲ್ಲಿ ದಾರುಣ ಘಟನೆಯೋಂದು ಬೆಳಕಿಗೆ ಬಂದಿದೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಪತಿಯೊಬ್ಬನು ತನ್ನ ಪತ್ನಿಯೊಂದಿಗೆ ನಡೆದ ಗಲಾಟೆಯ ಬಳಿಕ ಆಕೆಯನ್ನು ಕೊಂದು, ನಂತರ ತನ್ನ ಆಪ್ತ ಸ್ನೇಹಿತನಿಗೆ ಈ ವಿಷಯವನ್ನು ತಿಳಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ತಿಳಿಸಿರುವ ಪ್ರಕಾರ, ಆರೋಪಿ ಅಜಯ್ ಕುಮಾರ್ (30) ಆತ್ಮಹತ್ಯೆ ಮಾಡುವುದಾಗಿ ಹೇಳುವ ವೀಡಿಯೊ ಸಂದೇಶವನ್ನು ತನ್ನ ಸ್ನೇಹಿತನಿಗೆ ಕಳುಹಿಸಿದ್ದನು. ಆ ವೀಡಿಯೊ ಸಂದೇಶವನ್ನು ಪಡೆದ ಸ್ನೇಹಿತನು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮೂಲದ ಕುಮಾರ್ ಮತ್ತು ಪಶ್ಚಿಮ ಬಂಗಾಳದ ಅಸನ್ಸೋಲ್ ಮೂಲದ ಸ್ವೀಟಿ ಶರ್ಮಾ (28) ಇಬ್ಬರೂ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆಯ ನಂತರ ದಂಪತಿ ಗುರುಗ್ರಾಮ್‌ನಲ್ಲಿ ನೆಲೆಸಿದ್ದು, ಇಬ್ಬರೂ ಅಲ್ಲಿಯ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.

ಪೊಲೀಸರು ತಿಳಿಸಿದ ಪ್ರಕಾರ, ಅಜಯ್ ಕುಮಾರ್ ತನ್ನ ಸ್ನೇಹಿತನಿಗೆ ಮಧ್ಯಾಹ್ನ 3.15ರ ಸುಮಾರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ. ಅದಕ್ಕೂ ಮುನ್ನ ದಂಪತಿ ನಡುವೆ ವಾಗ್ವಾದ ನಡೆದಿತ್ತು ಎಂದು ತಿಳಿದುಬಂದಿದೆ. ನಂತರ ಪೊಲೀಸರು ತಕ್ಷಣವೇ ಸೆಕ್ಟರ್ 37 ರಲ್ಲಿರುವ ಅವರ ವಸತಿ ಸಮುದಾಯದ ಫ್ಲಾಟ್‌ಗೆ ಧಾವಿಸಿದರು. ಅಲ್ಲಿ ಶರ್ಮಾಳ ಶವ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿತು. ತನಿಖೆಯಲ್ಲಿ ಆಕೆಯ ಕುತ್ತಿಗೆಯನ್ನು ಸ್ಕಾರ್ಫ್‌ನಿಂದ ಬಿಗಿದು ಕೊಲೆ ಮಾಡಲಾಗಿದೆ ಎಂಬುದು ಬಹಿರಂಗವಾಯಿತು. ಇದೇ ವೇಳೆ, ಅಜಯ್ ಕುಮಾರ್ ತನ್ನನ್ನು ತಾನೇ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾದನು. ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಅಜಯ್ ಕುಮಾರ್ ತನ್ನ ಪತ್ನಿಯನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಇಡೀ ಘಟನೆಯ ನಿಜವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮೃತಳ ಕುಟುಂಬವು ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ದೂರು ನೀಡಿದೆ.

ಇದರ ನಡುವೆ ಮತ್ತೊಂದು ಆತ್ಮಹತ್ಯೆಯ ಘಟನೆ ಹರಿದ್ವಾರದಲ್ಲಿ ನಡೆದಿದೆ. ನವೀನ್ ಎಂಬ ವ್ಯಕ್ತಿ ತನ್ನ ಭಾವಿ ಪತ್ನಿಯೊಂದಿಗೆ ವೀಡಿಯೊ ಕಾಲ್‌ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ನವೀನ್ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿದ್ದು, ಸ್ನೇಹಿತನ ಮನೆಯಲ್ಲಿ ವಾಸಿಸುತ್ತಿದ್ದನು. ಆತ ಇಷ್ಟಪಟ್ಟ ಹುಡುಗಿಯೊಂದಿಗೆ ನಿಶ್ಚಿತಾರ್ಥವಾಗಿತ್ತು. ಆದರೆ ಆತನ ಆಕಸ್ಮಿಕ ನಿರ್ಧಾರದ ಹಿಂದೆ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನೆಯ ದಿನ ಮಧ್ಯಾಹ್ನ 2.30ರ ಸಮಯದಲ್ಲಿ, ನವೀನ್ ತನ್ನ ನಿಶ್ಚಿತ ವಧುವಿನೊಂದಿಗೆ ಫೇಸ್‌ಬುಕ್‌ ವೀಡಿಯೊ ಕಾಲ್‌ನಲ್ಲಿ ಮಾತನಾಡುತ್ತಿದ್ದನು. ಇದೇ ವೇಳೆ ಇದ್ದಕ್ಕಿದ್ದಂತೆ ಆತ ಹಗ್ಗವನ್ನು ತೆಗೆದುಕೊಂಡು ಅದನ್ನು ಸೀಲಿಂಗ್ ಫ್ಯಾನ್‌ಗೆ ಕಟ್ಟಿ ನೇಣು ಬಿಗಿದುಕೊಂಡನು. ಕರೆ ನಡೆಸುತ್ತಿದ್ದ ಆತನ ಭಾವಿ ಪತ್ನಿ ಈ ದೃಶ್ಯವನ್ನು ನೇರವಾಗಿ ಕಂಡು ಬೆಚ್ಚಿಬಿದ್ದಳು. ಮಾಹಿತಿ ದೊರೆತ ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ನವೀನ್ ಹಾಗೂ ಆತನ ನಿಶ್ಚಿತಾರ್ಥಿತೆ ಹಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೂ ಆತ್ಮಹತ್ಯೆಗೆ ಆತ ಯಾವ ಕಾರಣದಿಂದ ಮುಂದಾಗಿದ್ದಾನೆ ಎಂಬುದು ಸ್ಪಷ್ಟವಾಗಬೇಕಾಗಿದೆ.

Spread the love

Leave a Reply

Your email address will not be published. Required fields are marked *