ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಒಡೆರಹಳ್ಳಿ ಬಳಿಯ ಎಪಿಎಂಸಿ
ವರ್ತಕರಿಗೆ ಈಗಾಗಲೇ 55 ತಿಂಗಳು ಗಳಿಗೆ ಯಶವಂತಪುರ ಎಪಿಎಂಸಿಯಿಂದ ದಾಸನಪುರ ಎಪಿಎಂಸಿಗೆ ವರ್ಗಾವಣೆ ಮಾಡಿ ಹಾಗೂ ಜೇಷ್ಠತೆ ಆಧಾರದ ಮೇಲೆ 212 ಮಳಿಗೆಗಳನ್ನ ವರ್ತಕರಿಗೆ ಹಂಚಿಕೆ ಮಾಡಲಾಗಿತ್ತು.
55 ತಿಂಗಳು ಮುಗಿದು ಕೆಲವೊಂದು ಕಾರಣಗಳಿಂದ ಈ ವಿಚಾರ ನ್ಯಾಯಾಲಯದ ಮೆಟ್ಟಲೇರಿ ಈಗಾಗಲೇ 90 ತಿಂಗಳು ಕಳೆದಿದೆ
ನ್ಯಾಯಾಲಯದಲ್ಲೂ ಕೂಡ ಮಳಿಗೆಗಳನ್ನು ವಾಪಸ್ ಪಡೆದು ಹಂಚಿಕೆ ಮಾಡಿ ಎಂದು ಹೇಳಿಲ್ಲ ನಾವುಗಳೇ ಮಳಿಗೆಗಳ ಬಾಡಿಗೆಗಳನ್ನು ಕಟ್ಟಿಕೊಂಡು ಹೋಗುತ್ತೇವೆ ಹಾಗಾಗಿ ಯಾವುದೇ ಕಾರಣಕ್ಕೂ ಮಳಿಗೆಗಳನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ವರ್ತಕರು ತಿಳಿಸಿದ್ದಾರೆ.
ಆದರೆ ಈ ಹಿಂದೆ ಯಶವಂತಪುರ ಎಪಿಎಂಸಿ ಮಳಿಗೆಯ ವರ್ತಕರಿಗೆ ಮರು ಹಂಚಿಕೆ ಮಾಡುವ ಉದ್ದೇಶದಿಂದ ಈಗಿನ ಮಳಿಗೆಗಳ ವರ್ತಕರುಗಳಿಗೆ ಖಾಲಿ ಮಾಡಿ ಕೊಡುವಂತೆ ತೊಂದರೆ ನೀಡಲಾಗ್ತಾಯಿದೆ ನಾವುಗಳು ಎಲ್ಲಿಗೆ ಹೋಗುವುದು ನಮ್ಮ ಮುಂದಿನ ಜೀವನ ಹೇಗೆ ನಮ್ಮನ್ನು ನಂಬಿಕೊಂಡಿರುವ ಕೂಲಿ ಕಾರ್ಮಿಕರ ಸ್ಥಿತಿಗತಿಗಳೇನು ಹಾಗಾಗಿ ಯಾವುದೇ ಕಾರಣಕ್ಕೂ ನಾವು ಮಳಿಗೆಗಳನ್ನು ಖಾಲಿ ಮಾಡುವುದಿಲ್ಲ ಎಂದು ದಾಸನಪುರದ ಎಪಿಎಂಸಿ ಬಿ ಬ್ಲಾಕ್ ನ ವರ್ತಕರು ಶಾಂತಿಯುತ ಪ್ರತಿಭಟನೆ ಮಾಡಿದ್ದಾರೆ.